ನನ್ನ ಆತ್ಮಶಕ್ತಿಯನ್ನು ಹೊರತೆಗೆದದ್ದು…… ಶ್ರೀ ಸಾಯಿ ಕಾಮಧೇನು ಫೌಂಡೇಶನ್

ಮುಂದುವರೆಯುತ್ತಾ ಹೋದಂತೆ ಜೊತೆ ಜೊತೆಗೆ ಹತ್ತಾರು ತಂಡಗಳು ಹುಟ್ಟಿಕೊಂಡವು, ಒಂದೊಂದೂ ಒಂದೊಂದು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ನೀಡುವ ಉದ್ದೇಶವನ್ನೇ ಬೆಳೆಸಿಕೊಂಡವು.
ಇಂತಹ ತಂಡಗಳಲ್ಲಿ ನನ್ನ ಗಮನ ಸೆಳೆದೆ ಮತ್ತೊಂದು ತಂಡವೆಂದರೆ ಅದು ಶ್ರೀ ಸಾಯಿ ಕಾಮಧೇನು ಫೌಂಡೇಶನ್, ಈ ತಂಡದ ನಿರ್ವಾಹಕನಾಗಿ ಜೊತೆಗೂಡಿ  ತಂಡದ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ನನ್ನ ಬಾಲ್ಯದ ಕನಸಿಗೆ ಮತ್ತಷ್ಟು ರಂಗು ಬಂದಿತು.

Image

ಅದೊಂದು ಸಮಾನ ಮನಸ್ಕರ ಪುಟ್ಟ ತಂಡ ಸಂತಸಗಳ ಹಂಚುತ್ತಾ ನೋವುಗಳನ್ನು ಮರೆಸುತ್ತಾ, ಸದಾ ಉತ್ಸಾಹದ ಚಿಲುಮೆಯ ತಂಡ.  ಸಮಯ ಸಿಕ್ಕಾಗಲೆಲ್ಲಾ ಒಂದು ಕಡೆ ಭೇಟಿಯಾಗಿ ವಿಚಾರ ವಿನಿಮಯಗಳನ್ನು ಸಂಗ್ರಹಿಸಿ ಎಲ್ಲರೂ ಚರ್ಚಿಸಿ  ಕುಶಿ ಕುಶಿ ವಿಚಾರಗಳನ್ನು ಹಂಚಿಕೊಂಡು ಸದಾ ನಗು ನಗುತ್ತಾ ಸಾಗುತ್ತಿದ್ದ  ತಂಡವೇ ಈ ಕಾಮಧೇನು ಫೌಂಡೇಶನ್.

ಒಂದು ಸುಂದರ ಆಶಯವನ್ನು ಹೊತ್ತು ನೂರಾರು ಬಡ ಮಕ್ಕಳ  ಆಸೆಗಳಿಗೆ ನೆರವಾಗುವ,  ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಬೇಕಾಗುವ ವಿವಿಧ ಸವಲತ್ತುಗಳ ಬಗ್ಗೆ ಗಮನ ಹರಿಸಿ, ಮಕ್ಕಳಲ್ಲಿ ತಾಂತ್ರಿಕವಾಗಿ ಮತ್ತು ಬೌದ್ದಿಕ  ಜ್ಞಾನವನ್ನು ವೃದ್ಧಿಸುವ ಆಶಯ ಈ ತಂಡದ್ದು……  ಈ SSKF ತಂಡವು ಕೂಡ ನನ್ನ ಬದುಕಿನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ…. ತುಂಬು ಮನದ ವಂದನೆಗಳು SSKF ಟೀಮ್……..

ಈ ತಂಡದ ಜೊತೆಗೂಡಿ 2011ರಲ್ಲಿ ಮಲ್ಲಿಗೆರೆ ಶಾಲೆಯ ಮಕ್ಕಳಿಗೆ ಪಾದರಕ್ಷೆ, ನೋಟ್ ಪುಸ್ತಕ,  ಶಭ್ಧ ಮಂಜರಿಗಳನ್ನು ವಿತರಿಸುವ ಮೂಲಕ ನೂರಾರು ಮಕ್ಕಳ ಸಂತಸಕ್ಕೆ ಕಾರಣವಾಯಿತು ಈ ತಂಡ………….

ಬೆಳೆದು ಬಂದ ಬಂದ ದಾರಿಯಲ್ಲಿ
ನೆರಳು ನೀಡಿದಂತ ಮರಗಳನು
ಮರೆಯುವವ ಮರೆಗುಳಿ ನಾನಲ್ಲ…..

ಎಲ್ಲವನ್ನೂ ಮನದಿ ನೆನೆದು
ಎಲ್ಲರಿಗೂ ಮನದಿ ನಮಿಸಿ
ಧನ್ಯತೆಯ ಹೊಂದುವ ನಾ….

ಬದುಕ ಪಯಣದಲ್ಲಿ ನೂರು ಆಶಾಭಾವಗಳನ್ನು ಮೂಡಿಸಿದ ಸ್ನೇಹಲೋಕ ಮತ್ತು ಶ್ರೀ ಸಾಯಿ ಕಾಮಧೇನು ಫೌಂಡೇಶನ್  ಈ ಎರಡು ತಂಡಗಳಿಗೂ ನನ್ನ ಮನದ ನೂರು ನಮನ…………..

ಮುಂದಿನ ವಾರ……….  ಹತ್ತು ಜನರಿಂದ ಒಂದೊಂದು ತುತ್ತು…………….

Leave a comment